ನಾ ಕಂಡ ಗಾಂಧಾರಿ
ಅಲ್ಲಲ್ಲಿ ಬೀದಿಗಳಲಿ
ಸೆರಗೆಳೆದು ನಡೆಯುತ್ತಿದ್ದಾಳೆ;
ಸುಗಂಧದ ಸುಳಿವಿಲ್ಲದೆ
ರಣಬಿಸಿಲಲ್ಲಿ ಬೇಯುತ್ತಿದ್ದಾಳೆ
ಸುತ್ತಿಕೊಂಡಿದ್ದಾಳೆ ಬಟ್ಟೆ
ಕಣ್ಣಿಗಷ್ಟೇ ಅಲ್ಲ ಬಾಯಿಗು !
ಕುರುಡನಲ್ಲದ ಕುಡುಕ ಗಂಡನ
ದರಬಾರಿನಲಿ ಇಂದು
ದ್ರೌಪದಿಗು ಹೀನವಾಗಿ
ಬತ್ತಲಾಗಿದ್ದಾಳೆ .
ಅಲ್ಲತ್ತ ಭೀಷ್ಮ ಕೃಪರ
ಮಾತಿಗೂ ಬೆಲೆಯಿಲ್ಲ;
ಇತ್ತ ಊರವರ ದುರ್ಯೋಧನ
ತನ್ನ ಮಗನೆನ್ನಲು
ಮಮತೆ ಕೇಳುವುದಿಲ್ಲ !!
ಬದುಕಿನಿತು ರಣರಂಗ-
ವಾಯ್ತೆಂದು ವ್ಯಥಿಸಿದರೂ
ಸಂಜೆಯೂಟಕೆ ಮತ್ತವಳೇ ದುಡಿಬೇಕಲ್ಲ!!
- ಕಾವ್ಯಮಯಿ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ