ಮಂಗಳವಾರ, ಮೇ 7, 2024

ರಾಧೆಯ ಮನದಾಳ

                     ರಾಧೆಯ ಮನದಾಳ 


ಹೇ ಕೃಷ್ಣಾ,

   ನಿನ್ನ ಕೊಳಲ ಇಂಪಾದ ದನಿಗೆ 

  ನೋಡು ಜಗವೆಲ್ಲ ಕಿವಿಯಾಗಿದೆ 

  ಮನದೊಳಗೆ ಇಳಿಯುತ್ತಾ 

 ಆಹ್ಲಾದಗೊಳ್ಳುತ್ತ ತಂಪಾಯಿತು 


ಹೇ ಕೃಷ್ಣಾ,

   ಮಗುವನ್ನು ಲಾಲಿಸುವ ತಾಯಾಗಿ 

  ಮಮತೆ ತುಂಬಿದೊಸರಂತೆ 

  ನೊಂದ ಜೀವ ಸಂಕುಲಕೆ 

  ಹಿತವೆನಿಸಿ ನಿದ್ದೆಗಿಳಿಸಿದೆ.


ಹೇ ಕೃಷ್ಣಾ,

   ನೀ ಹೀಗೆ ನುಡಿಸುವಾಗ 

   ಎಲ್ಲರಂತೆಲ್ಲವನು ಮರೆತು

   ಕಳೆದು ಹೋಗಬಾರದೇಕೆ?

  ಎಂದೆಣಿಸದಿರದೆ ಈ ರಾಧೆಗೆ....

                                   - ಕಾವ್ಯಮಯಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ