ಆಕಾಶದ ಪರಿಧಿ ಅಳೆದು
ಹೊಡೆದ ತಲೆ ಗಿರಕಿ ಹನ್ನೆರಡು
ಕೂಗಿ ಕರೆದ ಬಂಧು - ಬಳಗ
ತೆರೆದ ಕಣ್ಣು ಕನಸು ಬೊಗಸೆ
ತೂರಿ ಬೆರಳ ತೊಟ್ಟು ತೊಟ್ಟು
ಹರಿದು ಬರಿದ ಬದುಕು ಕೊನೆಗೆ
ಹೆಸರು ಇದ್ದು ಕರೆದ ಶವ
ಹುಟ್ಟು ಪಡೆದು ಸತ್ತ ಕಾರ್ಯ-
ಭಾರವೆಲ್ಲ ಕಾಗೆ ಮೇಲೆ
ಎರಡು ಕ್ಷಣದ ಬಾಯಿ ಮಾತು
ಮರೆತ ಜನರ ಹೊಕ್ಕಲೆಷ್ಟು
ನಡುವೆ ನಡೆದ ರಾಸಲೀಲೆ !?
ಬಡವ ಸಿರಿಕ ಭೇಧವಿರದ
ನ್ಯಾಯಬೆಲೆಯ ಸರ್ವಖಾತೆ
ಬಯಸಿ ಬರಿಸಿ ತಲ್ಲಣಿಸಿ
ಬೆಚ್ಚನುಸಿರ ತಂಪು ಸೊರಗು
ಮೂವತ್ತು, ಇಪ್ಪತ್ತೈದು,ಹತ್ತು,ಐದು,
ಶೂನ್ಯ.............................
ಏನು ಇದ್ದರೂ ಸುಡುವ ತನಕ......ಇವರ ಶವ
ಸತ್ತ ಮೇಲೆ ....?
ಕರೆಯುತ್ತೇವಲ್ಲ
ಕಾ....ಕಾ....
- ಕಾವ್ಯಮಯಿ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ