ಮಂಗಳವಾರ, ಅಕ್ಟೋಬರ್ 29, 2013
ಗುರುವಾರ, ಅಕ್ಟೋಬರ್ 24, 2013
ಸೋಮವಾರ, ಅಕ್ಟೋಬರ್ 21, 2013
ಹನಿಗವಿತೆಗಳು
ಸಮಯ ವ್ಯರ್ಥ
ನದಿ ಮರ ಗಿಡ ಕರಗಿತೆನ್ನಲು ವ್ಯರ್ಥ
ಕಲ್ಲು ಬಂಡೆ ಕೊಡುವುತೆನ್ನಲು ವ್ಯರ್ಥ
ನಿಂತಲ್ಲೇ ಸವೆಯುವುದು ಆವ ಕಾರ್ಯಕೆ ಸೂಕ್ತ
ಇಟ್ಟಹೆಜ್ಜೆ ನಾಲ್ಕು ದಿವಸದ ಕಾಯ
ನಡೆಯುತ್ತಲೇ ಸವೆಯುವುದು ವ್ಯರ್ಥವೇನು ?
ಇಬ್ಬರಿಗೂ ಒಂದೇ ತಾನೆ
ಸಮಯ!
ನಿರ್ಭಾವ ಅಮ್ಮ
ಹಲವು ವಿಸ್ಮಯ ಒಡಲಲ್ಲಿ ಬಚ್ಚಿಟ್ಟು
ಹಾದಿ ನೋವ ನುಂಗುತ ನಿಂದೆ
ಅಪೂರ್ಣ ಚೇತನ ನನಗಾಗಿ ನೀ ನಕ್ಕೆ
ಎಷ್ಟು ಕಾಲವೊ ಬಲ್ಲ ನಾ ಅತ್ತು ನೀನತ್ತೆ
ಜೀವ ನಿನಗಾರು ಸಾಟಿ
ನಿರ್ಭಾವ. ಜಗದೊಳಗೆ ಅಮ್ಮಾ...
ಶನಿವಾರ, ಅಕ್ಟೋಬರ್ 12, 2013
ಶವ ಮತ್ತು ಕಾಗೆ
ಆಕಾಶದ ಪರಿಧಿ ಅಳೆದು
ಹೊಡೆದ ತಲೆ ಗಿರಕಿ ಹನ್ನೆರಡು
ಕೂಗಿ ಕರೆದ ಬಂಧು - ಬಳಗ
ತೆರೆದ ಕಣ್ಣು ಕನಸು ಬೊಗಸೆ
ತೂರಿ ಬೆರಳ ತೊಟ್ಟು ತೊಟ್ಟು
ಹರಿದು ಬರಿದ ಬದುಕು ಕೊನೆಗೆ
ಹೆಸರು ಇದ್ದು ಕರೆದ ಶವ
ಹುಟ್ಟು ಪಡೆದು ಸತ್ತ ಕಾರ್ಯ-
ಭಾರವೆಲ್ಲ ಕಾಗೆ ಮೇಲೆ
ಎರಡು ಕ್ಷಣದ ಬಾಯಿ ಮಾತು
ಮರೆತ ಜನರ ಹೊಕ್ಕಲೆಷ್ಟು
ನಡುವೆ ನಡೆದ ರಾಸಲೀಲೆ !?
ಬಡವ ಸಿರಿಕ ಭೇಧವಿರದ
ನ್ಯಾಯಬೆಲೆಯ ಸರ್ವಖಾತೆ
ಬಯಸಿ ಬರಿಸಿ ತಲ್ಲಣಿಸಿ
ಬೆಚ್ಚನುಸಿರ ತಂಪು ಸೊರಗು
ಮೂವತ್ತು, ಇಪ್ಪತ್ತೈದು,ಹತ್ತು,ಐದು,
ಶೂನ್ಯ.............................
ಏನು ಇದ್ದರೂ ಸುಡುವ ತನಕ......ಇವರ ಶವ
ಸತ್ತ ಮೇಲೆ ....?
ಕರೆಯುತ್ತೇವಲ್ಲ
ಕಾ....ಕಾ....
- ಕಾವ್ಯಮಯಿ
ಗುರುವಾರ, ಅಕ್ಟೋಬರ್ 10, 2013
ಮೌನ ನಿವೇದನೆಗೆ...
ತತ್ಸಮಗಳ ಹೊಂದಿಕೊಂಡು
ಅರ್ಥ, ವ್ಯರ್ಥ, ಅಲಂಕಾರೋಪಮ
ಮೌನ ನಿವೇದನೆಗೆ ಪೂರ್ಣವಿರಾಮ.
ಯಿಂದ ,ಗೆ ಗಳ ಕರಣ ಕಾರಕ
ಗುರು ಲಘುಗಳ ಮಧ್ಯೆ ಮರುಕ
ಕರ್ನಾಟ ವೃತ್ತವೃಂದ ಸುತ್ತಿ ಸುತ್ತಿ
ಈ ಮೌನ ನಿವೇದನೆಗೇಕೆ ಅಂಥ ಬುತ್ತಿ?
ಸಾಲು ಅಂಕೆಯ ನುಸುಳಿ ಹಂಸಪಾದ
ನೀರವತೆಯ ಮುಖದಲಿಲ್ಲ ವಿಧ ಸುವಿಧ
ಮೌನ ಹೇಳುವ ಗಂಧ, ರೂಪ, ರಸ
ಎದುರು ನಿಲ್ಲುದೆ ಶಬ್ದಮಣಿಯ ಕೋಶ?
- ಕಾವ್ಯಮಯಿ
ಮಂಗಳವಾರ, ಅಕ್ಟೋಬರ್ 1, 2013
ಸುಗಿಪುಗ ತುಳುನಾಡ ಐಸಿರಿನ್
ಪಡ್ಡಾಯಿ ಕಡಲಡ್ದ್ ಬೀಜುನ ತಂಪುಡು
ನಿನೆತ್ಂಡ್ ನಾಚ್ಂಡ್ ತುಳುಮಣ್ಣ್
ಗಂಧೊದ ಕಮ್ಮೆನ ಉಡಲ್ ಗ್ ಜತ್ತ್ಂಡು
ಸುಗಿಪುಗ ತುಳುನಾಡ ಐಸಿರಿನ್
ಬರ್ಸೊದ ಪನಿ ಪನಿ ಬಾನ್ ಡ್ ಓಕುಳಿ
ಎಂಚಿತ್ತಿ ಸಂಭ್ರಮೊಡ್ ಈ ಕಣ್ಣ್
ನಲಿಪುನ ಕೈಯ್ ಕಂಡೊ ತೆಲಿಪುನ ಪಕ್ಕಿಲು
ಸುಗಿ ಪುಗ ತುಳುನಾಡ ಐಸಿರಿನ್
ಪೂ ಪಿಂಗಾರೊದ ಉಸುಲುದ ಪರ್ಬ
ಪೊದೆಪಾದ್ ಅರಳುಂಡ್ ಸಾವಿರೊ ಬಣ್ಣ
ಮೋಕೆ ಸಿಂಗಾರೊದ ಸ್ವರ್ಗೊನೆ ಮುಲ್ಪ
ಸುಗಿಪುಗ ತುಳುನಾಡ ಐಸಿರಿನ್
-ಕಾವ್ಯಮಯಿ
ನನ್ನ ಬಾಲ್ಯದಾಟಗಳು
ಅಟ್ಟ ಮುಟ್ಟ ತನ್ನ ದೀವಿ
ಬೆರಳುಗನು ಎಣಿಸುತಾ
ಕದ್ದು ಮುಚ್ಚೆ ಗಾಡೆ ಗೂಡೆ
ಅಜ್ಜಿಯನ್ನು ಕಾಡುತಾ
ಮರಕೋತಿ, ಗಿಣ್ಣಿದಾಂಡು
ಸೋಲದಂತೆ ಗೆಲ್ಲುತಾ
ಟೊಂಕಲಾಟ,ಲಗೋರಿಯಲ್ಲಿ
ಮೈಮನವನು ಕುಣಿಸುತಾ
ಟೊಪ್ಪಿ ಬೇಕಾ ಟೊಪ್ಪಿ ಆಡಿ
ಗೆಳೆಯರನ್ನು ಅಟ್ಟುತಾ
ಕೆರೆದಡವನು ಈಜಿ ಬಂದು
ಅವಲಕ್ಕಿ ಪಾಯಸ ಉಣ್ಣುತಾ
ಕಳೆದೆವೆಂಥ ಮಧುರ ಬಾಲ್ಯ
ಕ್ಷಣಗಳನ್ನು ನೆನೆಯುತಾ
ಜೊತೆಗೆ ಒಮ್ಮೆ ಆಟವಾಡೆ
ಬಳಗವನ್ನೆ ಕರೆದು ತಾ
-ಕಾವ್ಯಮಯಿ
ನೀನು ಬರಲಿಲ್ಲ...
ನೀನು ಬರಲಿಲ್ಲ ಮತ್ತೆ ಇವತ್ತೂ
ನಾ ಕಾಯುತ್ತಿದ್ದೆ ಎಷ್ಟು ಹೊತ್ತು
ಇಂದು ಕಳೆದರೆ ನಾಳೆ ಬೇರೆಯ ಸ್ವತ್ತು
ಅದು ನಿನಗೂ ಅಷ್ಟೇ ಗೊತ್ತು
ಬಿಂದಿಗೆ ತುಂಬಲು ತುಳುಕುತ್ತ ಬರಲು
ಕೈ ಬೀಸಿ ಕರೆದೆ ನೀ ಶಾಲೂ ಶಾಲೂ
ಮನಸ ಪುಟದಲ್ಲಿ ಇನಿಯ ನೀ ನಿಲಲು
ಬಾಳಲ್ಲಿ ಮೊರೆಯಿತು ಪ್ರೀತಿಯ ಕೊಳಲು
ಸ್ವರ್ಣೆಯ ಮಡಿಲಲ್ಲಿ ಹಾಡಿ ಸವಿಗಾನ
ಮಾಡಿಸಿ ಸಿಹಿಮಧುವ ಪಾನ
ತಾಕಿಸಿ ತವಕಿಸಿ ಜುಮ್ಮೆನಿಸಿ ಎನ್ನ
ಎತ್ತ ಹೋದೆಯೊ ಇಂದು ಬಾರದೆ ಚಿನ್ನ...
ತೊಡಿಸಿದೆ ಕಾಲ್ಗೆಜ್ಜೆ ಕೊಡಿಸಿದೆ ಗಿಳಿಯ
ಪ್ರತಿಕ್ಷಣವೂ ಕನವುತ್ತ ಪ್ರಿಯ ಗೆಳೆಯ
ತೊಳಲಾಟವದು ಕಣ್ಣುಮುಚ್ಚಾಲೆಯ
ಊರಿಗೆ ತಿಳಿದರೆ ಆಗುವುದು ಪ್ರಳಯ
ಬಿಟ್ಟು ಬರಲೆಂದು ಅಪ್ಪ ಅಮ್ಮನೆಲ್ಲ
ಎಣಿಸಿ ನಿನ್ನನು ಬಿಟ್ಟು ಬಂಧುಗಳಿಲ್ಲ
ಜೊತೆಗೂಡಿ ಜೀವನ ಪಾಯಸ-ಬೆಲ್ಲ
ದಾರಿಯ ಕಾದರೆ ನಿನ್ನ ಸುಳಿವಿಲ್ಲ!!
-ಕಾವ್ಯಮಯಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)